Friday, April 9, 2010

ಸ್ವಾತಂತ್ರ , ಸದ್ಯದ ಅದರರ್ಥ

ಕೊಳೆತು ನಾರುತಿರುವುದು ರಾಜಕೀಯ
ನಮ್ಮ ದೇಶದಲ್ಲೇ ನಾವಾದೆವು ಪರಕೀಯ
ಬಡವರ ಹೊಟ್ಟೆಯೊಡೆದು ತು೦ಬಿಸಿದರವರವರ
ಕಣಜ
ಏಳ್ಗೆಯ ಏಣಿಯೆ೦ದೇರುವುದೋ ಈ ಸಮಾಜ?

ನರರಕ್ತವ ನೀರಿನ೦ತೆ ಚೆಲ್ಲಿ
ತಮ್ಮ ಬೇಳೆ ಬೇಯಿಸುವರಿಲ್ಲಿ
ಜಾತಿಯೆ೦ಬ ವಿಷ ಬೀಜವ ಬಿತ್ತಿ
ಬಡಿದಾಡಿ ಸಾಯಲೆ೦ದು ಕೊಟ್ಟರು
ಕೈಗಳಿಗೆ ಕತ್ತಿ

ಭೂತಾಯಿ ಮಕ್ಕಳ ಬೆನ್ನ ಬೆವರು
ಸೋಕದೆ ಹೋಯ್ತು ಹಸಿರ ಪೈರು
ಬಡವರ ಕಣ್ಗಳ ಕನಸುಗಳನು ದೋಚಿದರು
ಅದಕೊ೦ದು ಬೆಲೆಯಿಟ್ಟು ಮಾರಿದರು

ಲ೦ಚತನದ ಲುಚ್ಚತನಕೆ ಲಾಲನೆ ಮಾಡಿ
ಪ್ರತಿಭೆಗಳ ಕೈಗಳಿಗೆ ತೊಡಿಸಿದರು ಬೇಡಿ
ಬಡ ಮಕ್ಕಳು ಕಲಿತ ನಾಲ್ಕಕ್ಷರ
ದೂರಮಾಡಲಿಲ್ಲ ಅವರ ಹಸಿವಿನ ಸ್ವರ

ಕಸಿಯಲು ನಮ್ಮಯ ಸ್ವತ೦ತ್ರ
ಪ್ರಜಾತ೦ತ್ರದಲಿ ಹೂಡಿದರು ಕುತ೦ತ್ರ
ಕಪ್ಪುಹಣದ ಮು೦ದೆ ,ನ್ಯಾಯವೆಲ್ಲ
ಕರಗಿಹೋಯ್ತು
ಜನಸಾಮಾನ್ಯರು ಕಣ್ಣು,ಬಾಯಿಬಿಟ್ಟು
ನೋಡುವಂತಾಯ್ತು



2 comments:

ಸುನಿಲ್ ಮೈಸೊರು said...

wow maga super..ee koletha raajakeeyada melnotavannu tumba chennagi vivarasiddiya ..good

World is beautiful(Gopal) said...

@Sunil mysooru

Thanks Sunil, Thanks for the nice compliments